Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಗ್ಯಾರಂಟಿ ಸಮಿತಿಗೆ ಬಸವರಾಜ್ ನೂತನ ಸದಸ್ಯರು*

*ಗ್ಯಾರಂಟಿ ಸಮಿತಿಗೆ ಬಸವರಾಜ್ ನೂತನ ಸದಸ್ಯರು* ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ನೂತನ ಸದಸ್ಯರಾಗಿ ಎಸ್.ಬಸವರಾಜ್ ರವರನ್ನು ನೇಮಿಸಿ ಆದೇಶಿಸಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ.ಶ್ರೀಕಾಂತ್ ರವರ ನಂಬಿಕಸ್ಥ ಸಮಾಜ ಸೇವಕರಲ್ಲಿ ಬಸವರಾಜ್ ಪ್ರಮುಖರು. ಎರಡು ವರ್ಷಗಳ ಅವಧಿಗೆ ಬಸವರಾಜ್ ರವರನ್ನು ನೇಮಕ ಮಾಡಿ ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

Read More

ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ; ಹೆಚ್.ಆರ್.ಬಸವರಾಜಪ್ಪ

ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ; ಹೆಚ್.ಆರ್.ಬಸವರಾಜಪ್ಪ ಶಿವಮೊಗ್ಗ ಜುಲೈ 6. ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಹೆಚ್ ಬಸವರಾಜಪ್ಪ ಹೇಳಿದರು.ಅವರು ಬಹುಮುಖಿ ವತಿಯಿಂದ ನ್ಯಾಶನಲ್ ಕಾಮರ್ಸ್ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ಕೃಷಿ ಕ್ಷೇತ್ರದ ತಲ್ಲಣಗಳ ಬಗ್ಗೆ ಮಾತನಾಡುತ್ತಿದ್ದರು. ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಧೋರಣೆಯ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕಬ್ಬು ಬೆಳೆಗಾರರ ಸಂಘ ಕಟ್ಟಿ ಹೋರಾಟ ಮಾಡಿ ನಂತರ ರುದ್ರಪ್ಪನವರ ನಾಯಕತ್ವದಲ್ಲಿ…

Read More

ಶಿವಮೊಗ್ಗ ಜಿ.ಪಂ‌. ನೂತನ ಸಿಇಓ ಆಗಿ ಹೇಮಂತ್…**ಲೋಖಂಡೆ ಬೆಂಗಳೂರಿಗೆ ವರ್ಗ*

*ಶಿವಮೊಗ್ಗ ಜಿ.ಪಂ‌. ನೂತನ ಸಿಇಓ ಆಗಿ ಹೇಮಂತ್…* *ಲೋಖಂಡೆ ಬೆಂಗಳೂರಿಗೆ ವರ್ಗ* ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲೋಖಂಡೆ ಸ್ನೇಹಲ್ ಸುಧಾಕರ್ ರವರನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ ಬಳ್ಳಾರಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತ ಎನ್.ಹೇಮಂತ್ ರವರನ್ನು ವರ್ಗಾಯಿಸಿ ಆದೇಶಿಸಿದೆ. ಲೋಖಂಡೆಯವರನ್ನು ಬೆಂಗಳೂರಿನ ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.

Read More

ಶಿವಮೊಗ್ಗ ಶಾಂತಿ ನಗರದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ, ಹನೀಫಾರಿಗೆ ರಾಷ್ಟ್ರಮಟ್ಟದ ಜಿಜ್ಞಾಸಾ ಪ್ರಶಸ್ತಿ*

*ಶಿವಮೊಗ್ಗ ಶಾಂತಿ ನಗರದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ, ಹನೀಫಾರಿಗೆ ರಾಷ್ಟ್ರಮಟ್ಟದ ಜಿಜ್ಞಾಸಾ ಪ್ರಶಸ್ತಿ* ರಾಷ್ಟ್ರಮಟ್ಟದ ಜಿಜ್ಞಾಸಾ ಸೈನ್ಸ್ ಮಾಡೆಲ್ ಮೇಕಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಶಾಂತಿನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ ಅಂಬೆರ್ ಮತ್ತು ಹನೀಫಾ ಬೀ ಯವರು ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ಗಳಿಸಿದರು. ಈ ಬಹುಮಾನಗಳನ್ನು ಶಿವಮೊಗ್ಗ ಬಿಇಓ ನಾಗರಾಜ್ ರವರು ವಿತರಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆ ಆಯೋಜಿಸಿದ್ದ…

Read More

ಗಾಜನೂರು ಡ್ಯಾಂ ಬಳಿ ಯುವತಿ ಅಪಹರಿಸಿ ಲೈಂಗಿಕ ದೌರ್ಜನ್ಯ! ಅಲ್ಲಿ ನಿಜವಾಗಲೂ ನಡೆದಿದ್ದೇನು? ಇಡೀ ರಾತ್ರಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಎಸ್ ಪಿ ಏನಂದ್ರು?

ಗಾಜನೂರು ಡ್ಯಾಂ ಬಳಿ ಯುವತಿ ಅಪಹರಿಸಿ ಲೈಂಗಿಕ ದೌರ್ಜನ್ಯ! ಅಲ್ಲಿ ನಿಜವಾಗಲೂ ನಡೆದಿದ್ದೇನು? ಇಡೀ ರಾತ್ರಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಎಸ್ ಪಿ ಏನಂದ್ರು? ಗಾಜನೂರು ನೋಡಲು ಹೋಗಿದ್ದ ಯುವತಿಯೊಬ್ಬಳನ್ನು ಅಕ್ರಮವಾಗಿ ಕರೆದೊಯ್ದು ಪಂಪ್‌ಹೌಸ್‌ನಲ್ಲಿ ಕೂಡಿ ಹಾಕಿರುವ ಪ್ರಕರಣ ವರದಿಯಾಗಿದ್ದು, ಈ ಪ್ರಕರಣದಲ್ಲಿ ಯುವತಿಯೊಂದಿಗೆ ಪುಂಡರ ಗ್ಯಾಂಗ್ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಅನುಮಾನಗಳಿವೆ. ಪ್ರಕರಣೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಕಿಡ್ನಾಪ್ ಮತ್ತು ಲೈಂಗಿಕ ಕಿರುಕುಳ ಕೇಸ್ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಬರಬೇಕಿದೆ. ಘಟನೆ…

Read More

ಮಾಜಿ ಶಾಸಕರೂ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಇವತ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿವೆ ಪ್ರಮುಖ ಅಂಶಗಳು…

ಮಾಜಿ ಶಾಸಕರೂ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಇವತ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿವೆ ಪ್ರಮುಖ ಅಂಶಗಳು… ಚೋರ್ ಬಜಾರ್ ಬೆಂಕಿ ದುರಂತ ದುರಾದೃಷ್ಟ. ಬಹಳ ಹಳೆಯ ಮಾರುಕಟ್ಟೆ. ಜನತೆಯ ಪರವಾಗಿ ಅಗ್ನಿ ನಂದಿಸಲು ಸಹಕರಿಸಿದ ಅಗ್ನಿ ಶಾಮಕ ದಳ ಮತ್ತು ಸ್ಥಳೀಯರಿಗೆ ಅಭಿನಂದನೆ. ಈ ನೆಪದಲ್ಲಾದರೂ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಿ.ಜಿಲ್ಲಾಧಿಕಾರಿ, ಆಯುಕ್ತರು ಮನಸು ಮಾಡಬೇಕು. ನಾಲ್ಕರಷ್ಟು ಆದಾಯ ಬರುವಂತೆ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಿ. ತಾತ್ಕಾಲಿಕ ವ್ಯವಸ್ಥೆಗೆ ಹೊಸ ಕಟ್ಟಡದಲ್ಲಿ ಅವಕಾಶ ಮಾಡಿಕೊಡಲಿ….

Read More

ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (ಕಾಸಿಯ )ಗೆ.. ಎಂ.ಎ. ರಮೇಶ್ ಹೆಗಡೆ ಕೌನ್ಸಿಲ್ ನಿರ್ದೇಶಕರಾಗಿ ಆಯ್ಕೆ

ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (ಕಾಸಿಯ )ಗೆ.. ಎಂ.ಎ. ರಮೇಶ್ ಹೆಗಡೆ ಕೌನ್ಸಿಲ್ ನಿರ್ದೇಶಕರಾಗಿ ಆಯ್ಕೆ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರು ಮೆಕ್ ವೈರ್ ಇಂಡಸ್ಟ್ರೀಸ್ ನ ಪಾಲುದಾರರಾದ,  ಎಂ ಎ ರಮೇಶ್ ಹೆಗಡೆಯವರು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಸಿ ಯ ಸಂಸ್ಥೆಗೆ ಕೌನ್ಸಿಲ್ ನಿರ್ದೇಶಕರಾಗಿ ಆಗಿ ಆಯ್ಕೆಯಾಗಿದ್ದಾರೆ. ಇವರಿಗೆ ಶಿವಮೊಗ್ಗ ಜಿಲ್ಲಾ…

Read More