Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಪತ್ರಕರ್ತರಿಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು? ನಾನು ಬಂಗಾರಪ್ಪರ ಅಳಿಯ-ಮಗ ಅಲ್ಲ ಒಂದು ಮಾಡೋಕೆ ನಾನ್ಯಾರು? ಗೀತಾ ಗೆಲ್ಲೋದು ಖಂಡಿತ

ಪತ್ರಕರ್ತರಿಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು? ನಾನು ಬಂಗಾರಪ್ಪರ ಅಳಿಯ-ಮಗ ಅಲ್ಲ ಒಂದು ಮಾಡೋಕೆ ನಾನ್ಯಾರು? ಗೀತಾ ಗೆಲ್ಲೋದು ಖಂಡಿತ ಬೆಳಗಾವಿ; ಗೀತಾ ಗೆಲ್ಲೋದು ಖಚಿತ ಎಂದು ನಟ ಶಿವರಾಜ್ ಕುಮಾರ್ ಮತ್ತೆ ಪುನರುಚ್ಛರಿಸಿದ್ದಾರೆ. ಶಿವಮೊಗ್ಗ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕರಟಕ ಡಮನಕ ಸಿನಿಮಾ ಪ್ರಮೋಷನ್ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ….

Read More

ಸಫಾ ಬೈತುಲ್ ಮಾಲ್ ನಿಂದ 300ಕ್ಕೂ ಹೆಚ್ಚಿನ ಕುಟುಂಬಗಳಿಗೆ ರಮ್ ಝಾನ್ ಕಿಟ್ ವಿತರಣೆ

ಸಾಗರ : ಸಫಾ ಬೈತುಲ್ ಮಾಲ್ ಸಾಗರ ಶಾಖೆಯ ವತಿಯಿಂದ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿಗೆ 2000 ರೂ ಬೆಲೆಯುಳ್ಳ ದಿನಸಿ ವಸ್ತುಗಳನ್ನು ಹೊಂದಿರುವ ರಮಝಾನ್ ಕಿಟ್ ಗಳನ್ನು ಅರ್ಹ ಬಡ ಕುಟುಂಬಗಳಿಗೆ ಸೋಮವಾರ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮೌಲಾನಾ ಕಲೀಮುಲ್ಲಾ ನಮ್ಮ ಸಂಸ್ಥೆಯ ವತಿಯಿಂದ ಕಳೆದ 10ವರ್ಷಗಳಿಂದ ರಂಜಾನ್ ಕಿಟ್ ವಿತರಿಸುತ್ತಾ ಬಂದಿದ್ದೇವೆ. ಇದರೊಂದಿಗೆ ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯ,ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ,ಮನೆ ನಿರ್ಮಾಣ,ಟೈಲರಿಂಗ್ ತರಬೇತಿ ಮತ್ತು ಹೊಲಿಗೆ…

Read More

ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ – ಜಗದೀಶ್ ಕೊಪ್ಪ

ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ – ಜಗದೀಶ್ ಕೊಪ್ಪ ಪ್ರಿಯ ಡಾಕ್ಟ್ರೇ, ಹೇಗಿದ್ದೀರಿ? ಈ ದಿನ ಪತ್ರಿಕೆಗಳಲ್ಲಿ ನೀವು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಸುದ್ದಿಯನ್ನು ಓದಿ ನನಗೆ ಅಚ್ಚರಿ ಮಾತ್ರವಲ್ಲ, ಅಘಾತವಾಯಿತು. ನೀವು ಯಾವುದೇ ಪಕ್ಷದಿಂದ ರಾಜಕಾರಣಕ್ಕೆ ಇಳಿಯುವುದು ನನಗೆ ಮಾತ್ರವಲ್ಲ, ಈ ನೆಲದ ಸಾವಿರಾರು ಕನ್ನಡಿಗರಿಗೆ ಬೇಡವಾದ ಸಂಗತಿಯಾಗಿದೆ. ಏಕೆಂದರೆ, ನಿಮ್ಮದು ಎಲ್ಲವನ್ನು ಮತ್ತು ಎಲ್ಲರನ್ನೂ ಮೀರಿದ ವ್ಯಕ್ತಿತ್ವ. ಉತ್ತರಕರ್ನಾಟಕದ ಜನತೆ ದಿವಂಗತ ಡಾ.ನಾಗಲೋಟಿ ಮಠ ಅವರನ್ನು ಇಂದಿಗೂ ತಮ್ಮ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತಾರೆ….

Read More

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಪ್ರದರ್ಶಿಸಲು ಸೂಚನೆ*

*ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಪ್ರದರ್ಶಿಸಲು ಸೂಚನೆ* ಶಿವಮೊಗ್ಗ- ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮದಂತೆ ಜಿಲ್ಲೆಯಾದ್ಯಂತ ಕನ್ನಡ ಭಾಷೆಯ ವ್ಯಾಪಕ ಬಳಕೆ ಹಾಗೂ ಶೇ.60 ರಷ್ಟು ಕನ್ನಡ ಭಾಷೆಯನ್ನು ನಾಮಫಲಕಗಳ ಮೇಲ್ಭಾಗದಲ್ಲಿ ಪ್ರದರ್ಶಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸೂಚನೆ ನೀಡಿದರು. ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ (ತಿದ್ದುಪಡಿ)ಅಧಿನಿಯಮ 2024ನ್ನು ರೂಪಿಸಿ ಆದೇಶಿಸಿರುವ ಹಿನ್ನೆಲೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಜಿಲ್ಲೆಯಾದ್ಯಂತ ಅಧಿನಿಯಮ ಜಾರಿಗೊಳಿಸುವ…

Read More

ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ!

ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ! ಕಾಂಗ್ರೆಸ್ ನ ಪ್ರಮುಖ ನಾಯಕರಾದ ಎಂ.ಶ್ರೀಕಾಂತ್ ರವರು ಶಿವಮೊಗ್ಹದಲ್ಲಿ ಇಂದಿನಿಂದ ಆರಂಭವಾಗಿರುವ 5 ದಿನಗಳ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಗತ್ಪ್ರಸಿದ್ಧ ಜಾತ್ರೆಗೆ ಈವರೆಗಿನ ಇತಿಹಾಸದಲ್ಲಿ ಮಾಡಿರದ ವಿಶೇಷ ಅಲಂಕಾರ ಹಾಗೂ ಲೈಟಿಂಗ್ಸ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…ದೇವಿಯ ದರ್ಶನಕ್ಕೆ ಗಾಂಧಿ ಬಜಾರಿಗೆ ಅಥವಾ ಕೋಟೆ ಬಳಿಯ ಮಾರಿಗದ್ದುಗೆಗೆ ಹೋದ ಭಕ್ತರೂ ಈ ಅಲಂಕಾರಗಳನ್ನು ಕಣ್ ತುಂಬಿಕೊಂಡು ಪ್ರಸನ್ನಚಿತ್ತರಾಗಬಹುದು. ಅಷ್ಟರ ಮಟ್ಟಿಗೆ ಎಂ.ಶ್ರೀಕಾಂತ್ ರವರ ದೇವಿಯ ಆವಾಸ…

Read More

ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ*

*ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ* ಶಿವಮೊಗ್ಗ: ಮಾ.12ರ ನಾಳೆಯಿಂದ ಆರಂಭವಾಗಲಿರುವ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಗೆ ಅಂತಿಮ ಸಿದ್ದತೆಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು 5 ದಿನಗಳ ಕಾಲ ಆಚರಿಸಲಾಗುವುದು ಎಂದು ಶ್ರೀಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು. ಅವರು ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ 5 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆಗಳು…

Read More

ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ; ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ

ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ; ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ ಶಿವಮೊಗ್ಗ;  ನಬಾರ್ಡ್‌ನಿಂದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ 195.73 ಕೋಟಿ ರೂ.ಗಳ ಸಾಲದ ಮೂಲಕ ಅನುದಾನ ನೀಡುವಂತೆ ಸರ್ಕಾರದ ಮೂಲಕ ಮನವಿ ಮಾಡಲಾಗಿದೆ ಎಂದು ಎಂಎಡಿಬಿಯ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಎಡಿಬಿ ಎಂಬುವುದು ಒಂದು ವಿಸ್ತಾರವಾದ ಕ್ಷೇತ್ರವಾಗಿದೆ. ಇಲ್ಲಿ 12 ಸಂಸದರು, 65 ವಿಧಾನಸಭಾ ಸದಸ್ಯರು, 21 ವಿಧಾನಪರಿಷತ್ ಸದಸ್ಯರು, 13 ಜಿ.ಪಂ. ಅಧ್ಯಕ್ಷರು ಹಾಗೂ…

Read More

ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;* *ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ* *ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ* *ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ*

*ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;* *ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ* *ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ* *ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ* ಶಿವಮೊಗ್ಗ; ಮೋದಿ ಗ್ಯಾರಂಟಿಯಿಂದ ಬಡವರ ಹಸಿದ ಹೊಟ್ಟೆಗಳು ತುಂಬಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬುದು ಈಗ ಸಾಬೀತಾಗಿದೆ. ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮೊದಲ ಬಾರಿ ಸ್ಪರ್ಧಿಸಿದಾಗ ಏನು ಕಡೆದು ಕಟ್ಟೆ ಹಾಕಿದ್ದರು? ಈಗ ವಿಮಾನ, ಹೈವೇ ಅಂತೆಲ್ಲ ಹೇಳಿಕೊಂಡು ಡಿಜಿಟಲ್ ಬ್ಯಾನರ್ ಗಳನ್ನು…

Read More