ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
1ನೇ ತರಗತಿ, ಎಲ್ಕೆಜಿ, ಯುಕೆಜಿ ಪ್ರವೇಶಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ; ವಿಧಾನಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
1ನೇ ತರಗತಿ, ಎಲ್ಕೆಜಿ, ಯುಕೆಜಿ ಪ್ರವೇಶಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ; ವಿಧಾನಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ ಬೆಂಗಳೂರು, 26 ಮಾರ್ಚ್ 2026: ರಾಜ್ಯದ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಕಡ್ಡಾಯಗೊಳಿಸಲಾಗಿದ್ದ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ಸಡಿಲಿಕೆ ನೀಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಇಂದು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ವಯೋಮಿತಿ ನಿಯಮದಿಂದಾಗಿ ತಮ್ಮ ಮಕ್ಕಳ ಪ್ರವೇಶಾತಿಗೆ ತೊಂದರೆಯಾಗುತ್ತಿದೆ ಎಂದು…
ಮರಳು ಮಾಫಿಯಾ ದಬ್ಬಾಳಿಕೆಯಿಂದ ಜನರಿಗೆ ಸಂಕಷ್ಟ; ತಕ್ಷಣ ಕ್ರಮಕ್ಕೆ ಡಿ.ಎಸ್. ಅರುಣ್ ಒತ್ತಾಯ
ಮರಳು ಮಾಫಿಯಾ ದಬ್ಬಾಳಿಕೆಯಿಂದ ಜನರಿಗೆ ಸಂಕಷ್ಟ; ತಕ್ಷಣ ಕ್ರಮಕ್ಕೆ ಡಿ.ಎಸ್. ಅರುಣ್ ಒತ್ತಾಯ ಬೆಂಗಳೂರು/ಶಿವಮೊಗ್ಗ: ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಕೃತಕ ಅಭಾವ ಮತ್ತು ಹರಾಜು ಪ್ರಕ್ರಿಯೆಯ ವಿಳಂಬದ ಗಂಭೀರ ಸಮಸ್ಯೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದ ಕಾರ್ಯಪಟ್ಟಿಯಲ್ಲಿ ಒಳಪಡಿಸಲಾಗಿದ್ದರೂ, ಸಮಯಾಭಾವ ಹಾಗೂ ವಿಧೇಯಕಗಳ ಅಂಗೀಕಾರದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಸಭೆಯಲ್ಲಿ ಚರ್ಚಿಸಲು ಅವಕಾಶ ದೊರೆಯಲಿಲ್ಲ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ…
*ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಚೈತನ್ಯ ಶಿಬಿರ*
*ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಚೈತನ್ಯ ಶಿಬಿರ* ಜನಸ್ನೇಹಿ ಪೊಲೀಸ್ ಮತ್ತು ಸಮಾಜಮುಖಿ ಪೊಲೀಸ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ತಮ್ಮ ದೈನಂದಿನ ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ , ಕುಟುಂಬದ ಬಗ್ಗೆ ಯೋಚಿಸದೆ ಕಾರ್ಯನಿರ್ವಹಿಸುವ ಭರದಲ್ಲಿ, ತಮ್ಮ ದೈಹಿಕ ಆರೋಗ್ಯ ಮಾನಸಿಕ ಒತ್ತಡ ನಿರ್ವಹಿಸುವಲ್ಲಿ ಹೆಚ್ಚಿನ ಪೊಲೀಸರು ವಿಫಲರಾಗುತ್ತಾರೆ. ಅದರನ್ವಯ ಸ್ಥೂಲಕಾಯ, ಬೊಜ್ಜು , ಅಧಿಕ ರಕ್ತದೊತ್ತಡ , ಸಕ್ಕರೆ ಕಾಯಿಲೆ , ಮಾನಸಿಕ ಒತ್ತಡ, ಸರಿಯಾದ ರೀತಿಯಲ್ಲಿ ಆಹಾರಪದ್ಧತಿ ಅಳವಡಿಸಿಕೊಳ್ಳದೆ ಇರುವುದು ಕಂಡು…
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಜಿ.ಡಿ.ಮಂಜುನಾಥ್ ನೇಮಕ*
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಜಿ.ಡಿ.ಮಂಜುನಾಥ್ ನೇಮಕ* ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸೂಚನೆಯ ಮೇರೆಗೆ ಶಿವಮೊಗ್ಗ ಜಿಲ್ಲಾ ವಕ್ತಾರರನ್ನಾಗಿ ಜಿ.ಡಿ.ಮಂಜುನಾಥ್ ರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ನೂತನ ಜಿಲ್ಲಾ ವಕ್ತಾರರಾದ ಜಿ.ಡಿ.ಮಂಜುನಾಥ್ ರವರಿಗೆ ಪತ್ರಕರ್ತರೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ಶಿ.ಜು.ಪಾಶ ಅಭಿನಂದಿಸಿದ್ದಾರೆ.
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಕಲಿಯುತ್ತಿರು, ಮುಂದೆ ಸಾಗುತ್ತಿರು ಹೃದಯವೇ… ಜೀವನವೆಂಬುದು ಅನುಭವಗಳಿಂದಲೇ ಸುಂದರವೂ… 2. ಮಂದಿರ ಮಸೀದಿ ಚರ್ಚುಗಳ ಒಳಗೂ ಹೊರಗೂ ಭಿಕ್ಷುಕರೇ ಇರುತ್ತಾರಲ್ಲ ಹೃದಯವೇ… ಇಬ್ಬರೂ ದಯನೀಯವಾಗಿ ಕೇಳುತ್ತಲೇ ಇರುತ್ತಾರೆ! 3. ಕತ್ತಿ ಸುಂದರವಾಗಿದ್ದರೆ ಸುಮ್ಮನಿರುವುದೇ ಹೃದಯವೇ… ಅದೂ ಕೇಳುತ್ತಿರುತ್ತೆ ಹದ ಬೆರೆತ ರಕ್ತ! – *ಶಿ.ಜು.ಪಾಶ* 8050112067 (26/3/2026)
ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು…
ಮಹಾನಗರ ಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ವಾಹನಕ್ಕೆ ನುಗ್ಗಿದ ನಾಗರಹಾವು… ವೀಡಿಯೋ ಮತ್ತು ಮಾಹಿತಿ- ನುಡಿಗಿಡ ಮಂಜು ನಗರದ ಕೆ.ಇ.ಬಿ ವೃತ್ತ ದಲ್ಲಿನ ಮಹಾನಗರಪಾಲಿಕೆಯ ಜಲಮಂಡಳಿಯ ಆವರಣದಲ್ಲಿ ನಿಂತಿದ್ದ ದ್ವಿಚಕ್ರ ವಾಹನದೊಳಗೆ ನಾಗರಹಾವೊಂದು ನುಗ್ಗಿದೆ.ಇದನ್ನು ಗಮನಿಸಿದ ನೌಕರರು ಸ್ನೇಕ್ ಕಿರಣ್ ರವರಿಗೆ ಪೋನ್ ಮಾಡಿದಾಗ ತಕ್ಷಣವೇ ಸ್ಪಂದಿಸಿದ ಕಿರಣ್ ಸ್ಥಳಕ್ಕೆ ಬಂದು ನೋಡಿ ಮೆಕ್ಯಾನಿಕ್ ರನ್ನು ಕರೆಸಿ ಗಾಡಿಯ ಪಾರ್ಟ್ಸ ತೆಗೆದಾಗ ಸುಮಾರು 2.5 ಅಡಿ ಉದ್ದದ ನಾಗರಹಾವು ಪತ್ತೆಯಾಯಿತು.ನಂತರ ನಾಗರ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಸಾಗಿಸಲಾಯಿತು.ಸ್ಥಳದಲ್ಲಿದ್ದ ಸಾರ್ವಜನಿಕರು…
ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ! ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ
ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ! ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ ವಿಧಾನಸಭೆಯ ಬೆನ್ನಲ್ಲೇ, ಇಂದು ವಿಧಾನ ಪರಿಷತ್ತಿನಲ್ಲಿಯೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚಿಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಲಾಯಿತು. ದಶಕಗಳ ಹಿಂದೆ…
*RCB ಹೆಸರು ಬದಲಾಗುತ್ತಾ?*
*RCB ಹೆಸರು ಬದಲಾಗುತ್ತಾ?* ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್ಸಿಬಿ ಈ ಸೀಸನ್ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ…
*ಕೇರಳದ ಚಿತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಹೆಚ್.ಸಿ.ಯೋಗೇಶ್*
*ಕೇರಳದ ಚಿತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಹೆಚ್.ಸಿ.ಯೋಗೇಶ್* ಕೇರಳ ರಾಜ್ಯದ ಪಾಲಕ ಜಿಲ್ಲೆಯ ಚಿತ್ತೂರು ಕ್ಷೇತ್ರದ ಚುನಾವಣೆಯ ಉಸ್ತುವಾರಿಯನ್ನಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್.ಸಿ. ಯೋಗೇಶ್ ರನ್ನು ನೇಮಕ ಮಾಡಿದ್ದು, ಇದರ ಅಂಗವಾಗಿ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂನಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ ಅವರು, ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೂ ಕೇರಳದ ಚುನಾವಣೆಯ ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ಪಕ್ಷವು ನೀಡಿರುವ ಜವಾಬ್ದಾರಿಯ ವಿಚಾರವಾಗಿ ಕೇರಳ ಸಂಪೂರ್ಣ ಚುನಾವಣೆ ಮುಗಿಯುವವರೆಗೂ ಉಸ್ತುವಾರಿಯಾಗಿ ಭಾಗಿಯಾಗಲು ತೆರಳಿದ್ದಾರೆ….


