Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಅಕ್ರಮ ನೀರು ಎತ್ತುವಳಿ : ಭದ್ರಾ ನಾಲೆ-ನದಿ ಪಾತ್ರ ಸುತ್ತಮುತ್ತ ನಿಷೇಧಾಜ್ಞೆ*

*ಅಕ್ರಮ ನೀರು ಎತ್ತುವಳಿ : ಭದ್ರಾ ನಾಲೆ-ನದಿ ಪಾತ್ರ ಸುತ್ತಮುತ್ತ ನಿಷೇಧಾಜ್ಞೆ* ಭದ್ರಾ ನಾಲಾ, ನದಿ ಪಾತ್ರ ಪ್ರದೇಶದಲ್ಲಿ ಅನಧಿಕೃತ ಪಂಪ್‍ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ನಿಷೇಧಿಸಿ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಸುತ್ತಮುತ್ತ 100 ಮೀ ವ್ಯಾಪ್ತಿಯಲ್ಲಿ ನಿಬಂಧನೆಗಳನ್ನು ವಿಧಿಸಿ ಫೆ.19 ರಿಂದ 26 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿರುತ್ತಾರೆ. ಫೆ.5 ರ ರಾತ್ರಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಯ ಪಟ್ಟಣಗಳಿಗೆ…

Read More

ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಮೋ ತಿರುಮಲೇಶ!

ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಮೋ ತಿರುಮಲೇಶ! ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಿರುಮಲೇಶ್ ಸದ್ದು ಮಾಡುತ್ತಿದ್ದಾರೆ. ಟ್ರಾಫಿಕ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆಗಿರುವ ತಿರುಮಲೇಶ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜನರಿಗೋಸ್ಕರ ಏನಾದರೂ ಒಳ್ಳೆಯದು ಮಾಡಬೇಕೆಂದು ಪ್ರತಿನಿತ್ಯ ಬೀದಿಗಿಳಿಯುತ್ತಾರೆ. ಬೀದಿ ಬೀದಿಯಲ್ಲೂ ಇರುವ ಸಂಚಾರಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಾರೆ. ಈ ಮೂಲಕ ಜನರಿಗೂ ಹತ್ತಿರವಾಗುತ್ತಿದ್ದಾರೆ. ಮೂಲತಃ ದಾವಣಗೆರೆ ಮೂಲದ ತಿರುಮಲೇಶ್ ಬಿಸಿರಕ್ತದ ಯುವಕರು. ಮೈಮೇಲೆ ಖಾಕಿ ಇದ್ದರೆ ಅದು ಜನರ ಸಮಸ್ಯೆಗಳನ್ನು ಬಗೆಹರಿಸಲು ಉಪಯೋಗವಾಗಬೇಕು ಎಂದು…

Read More

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಲ್ಲೇಶಪ್ಪಂದ್ ಏನ್ ಕಥೆ? ಅಂತೂ ತೊಲಗಿದ ಗೋಪಿನಾಥ!

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಲ್ಲೇಶಪ್ಪಂದ್ ಏನ್ ಕಥೆ? ಅಂತೂ ತೊಲಗಿದ ಗೋಪಿನಾಥ! ಸಮಾಜ ಕಲ್ಯಾಣ ಇಲಾಖೆ ಗಬ್ಬೆದ್ದು ಹೋಗಿದೆ. ಇಲ್ಲಿ ನಡೆಯುತ್ತಿರುವುದೆಲ್ಲ ಸರ್ಕಾರವನ್ನೇ ದೋಚುವ ಕೆಲಸ ಎಂಬಂತೆ ವಾತಾವರಣ ಸೃಷ್ಟಿಯಾಗುತ್ತಿದೆ. ಭ್ರಷ್ಟರನ್ನು ಕಪಾಳಮೋಕ್ಷಕ್ಕೊಳಪಡಿಸಿ ಓಡಿಸಬೇಕಾದ ಅಧಿಕಾರಿಗಳೇ ಅವರ ಭ್ರಷ್ಟತೆಯ ಮೇಲೆ ಪರದೆ ಹಾಕಿ ಸುಳ್ಳು ಸುಳ್ಳೇ ವರದಿಗಳನ್ನು ನೀಡುತ್ತಿರುವ ಭಯಾನಕ ಸತ್ಯವೊಂದು ಮತ್ತೆ ಹೊರ ಬಿದ್ದಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್.ಶಿವಣ್ಣ ಈ ಸತ್ಯದ ಹಿಂದೆ ಬಿದ್ದಿದ್ದಾರೆ. ಕಳೆದ ವಾರ ಶಿವಮೊಗ್ಗ…

Read More

ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ ಈ ವಾರ ಏನೇನಿದೆ?

*ಆತ್ಮೀಯರೇ,* ನೀವಿನ್ನೂ ಚಂದಾದಾರ ಆಗಿರದಿದ್ದಲ್ಲಿ ಕೂಡಲೇ ಚಂದಾದಾರರಾಗಿ… ಅಂಚೆಯ ಮೂಲಕ ಮನೆ ಬಾಗಿಲಿಗೇ *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* ಯನ್ನು ತರಿಸಿಕೊಳ್ಳಿ… ಈ ಮೂಲಕ ಪತ್ರಿಕೆಗೆ ಬೆನ್ನೆಲುಬಾಗಿ ನಿಲ್ಲಿ🤗💐 *5 ವರ್ಷಕ್ಕೆ-2,500₹* *ಲೈಫ್ ಮೆಂಬರ್ ಶಿಪ್-10,000₹* Google pay/ Phone pay *8050112067* – *ಶಿ.ಜು.ಪಾಶ* ಮೊ- 8050112067

Read More

ಶಿಕ್ಣಣಂ, ಸೌಖ್ಯಂ, ಸ್ವಚ್ಛತಂ ಹಾಗೂ ಸಮರ್ಥನಂಗೆ ಆದ್ಯತೆ ನೀಡಿದ ಶಾಹಿ ಎಕ್ಸ್ ಪೋರ್ಟ್ ಲಿ.

ಶಿಕ್ಣಣಂ, ಸೌಖ್ಯಂ, ಸ್ವಚ್ಛತಂ ಹಾಗೂ ಸಮರ್ಥನಂಗೆ ಆದ್ಯತೆ ನೀಡಿದ ಶಾಹಿ ಎಕ್ಸ್ ಪೋರ್ಟ್ ಲಿ. ನಿಧಿಗೆ ಶಾಲೆಯಲ್ಲಿ 4.24 ಕೋಟಿ ರೂ. ನೆರವಿನ ಕಾರ್ಯಕ್ರಮ ಕಳೆದ 50 ವರ್ಷಗಳ ಹಿಂದೆ ಆರಂಭಗೊಂಡ ಶಾಹಿ ಎಕ್ಸ್ ಪೋಸ್ಟ್ ಪ್ರೈವೇಟ್ ಲಿಮಿಟೆಡ್ ದೇಶದ ಅತಿ ದೊಡ್ಡ ಉಡುಪು ತಯಾರಕ ಹಾಗೂ ರಪ್ತುದಾರನಾಗಿ ಬೆಳೆದಿದ್ದು, ಶಿವಮೊಗ್ಗ ಸೇರಿದಂತೆ ದೇಶದ ಎಲ್ಲ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ ಹಾಗೂ ಕೌಶಲ್ಯ ಅಭಿವೃದ್ಧಿಗಳ ತರಬೇತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಶಾಯಿ ಎಕ್ಸ್ಪರ್ಟ್…

Read More

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ವಿರುದ್ಧ ಸರ್ಕಾರದ ಕೆಂಗಣ್ಣು?

EXCLUSIVE ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ವಿರುದ್ಧ ಸರ್ಕಾರದ ಕೆಂಗಣ್ಣು? ಅವರ ಅವಧಿಯಲ್ಲಿ ನಡೆದ ನೇಮಕಾತಿ,ಮೈಸೂರು ಸೇರಿದಂತೆ ವಿವಿದೆಡೆ ನಿರ್ಮಿಸಲಾದ ಕಟ್ಟಡ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಸಜ್ಜಾಗುತ್ತಿರುವ ಸರ್ಕಾರ ಒಂದೆರಡು ದಿನಗಳಲ್ಲಿ ತನಿಖೆಗೆ ಆದೇಶ ಇತ್ತೀಚೆಗಷ್ಟೇ ಜಯದೇವ ಹೃದ್ರೋಗ ಸಂಸ್ಥೆಯ ಸೇವೆಯಿಂದ ನಿವೃತ್ತರಾಗಿದ್ದ ಡಾ.ಮಂಜುನಾಥ್ ನಿವೃತ್ತಿಯ ನಂತರ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಮಂಜುನಾಥ್ ಸಜ್ಜಾಗುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಹಬ್ಬಿರುವ ಕಾಲದಲ್ಲೇ ತನಿಖೆಗೆ ಸಜ್ಜಾಗುತ್ತಿರುವ ಸರ್ಕಾರ ಈ ಸಂಬಂಧದ ಕಡತಗಳನ್ನು ಹಗಲಿರುಳು…

Read More

ಅನುಮಾನಾಸ್ಪದ ವ್ಯಕ್ತಿಗಳು ಮತ್ತು 36 ಪ್ರಕರಣಗಳು

ದಿನಾಂಕಃ 19-02-2024 ರಂದು ಸಂಜೆ *ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಮಾರ್ನಮಿ ಬೈಲು, ವಿಜಯ ಗ್ಯಾರೇಜ್ ಹತ್ತಿರ, ಸಾವರ್ಕರ್ ನಗರ, ಕೋಟೆ ರಸ್ತೆ, ವಾದಿಯೇ ಹುದ, ಅಂಬೇಡ್ಕರ್ ನಗರ *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಾಲರಾಜ್ ಅರಸು ರಸ್ತೆ, ಕೆಇಬಿ ವೃತ್ತ, ಜೆಹೆಚ್ ಪಟೇಲ್ ಬಡಾವಣೆ, ಹಾರ್ನಹಳ್ಳಿ, ಕುಂಸಿ *ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಕೂಲಿ ಬ್ಲಾಕ್ ಶೆಡ್, ಹೊಳೆಹೊನ್ನೂರು ರಸ್ತೆ, ಸಂತೆ ಮೈದಾನ, ಹುಡ್ಕೋ ಕಾಲೋನಿ, ಸನ್ಯಾಸಿ ಕೊಡ್ಮಗ್ಗೆ *ಶಿಕಾರಿಪುರ ಉಪ ವಿಭಾಗ…

Read More

ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ;ಆರ್.ಟಿ.ವಿಠಲಮೂರ್ತಿ ಬರಹ

ಆಪರೇಷನ್ ಕಮಲ ಬೇಡ ಅಂದ್ರು ಮೋದಿ? ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ. ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು.ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ…

Read More