ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದ ವಿರುದ್ಧ ಬಿಜೆಪಿ ಪ್ರತಿಭಟನೆ
ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದ ವಿರುದ್ಧ ಬಿಜೆಪಿ ಪ್ರತಿಭಟನೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ತರುತ್ತಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿದೇಯಕ-2025’ ಕೇವಲ ಒಂದು ವರ್ಗದ ಓಲೈಕೆಗಾಗಿ ರೂಪಿಸಿರುವ ಕರಾಳ ಕಾನೂನಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಈ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ, ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಶಾಸಕರಾದ ಎಸ್ಎನ್…
*ಡಿಸೆಂಬರ್ 27ರಂದು ಶಿವಮೊಗ್ಗದಲ್ಲಿ ದೈವಜ್ಞ ದರ್ಶನ’ ಕಾರ್ಯಕ್ರಮ*
*ಡಿಸೆಂಬರ್ 27ರಂದು ಶಿವಮೊಗ್ಗದಲ್ಲಿ ದೈವಜ್ಞ ದರ್ಶನ’ ಕಾರ್ಯಕ್ರಮ* ಶ್ರೀಕ್ಷೇತ್ರ ಕರ್ಕಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಅವರ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರು ದೈವಜ್ಞ ಬ್ರಾಹ್ಮಣ ಸಮಾಜದ ಸಂಘಟನೆಯ ದೃಷ್ಟಿಯಿಂದ ಮತ್ತು ಉತ್ತರಾಧಿಕಾರಿಗಳಾದ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರನ್ನು ಪರಿಚಯಿಸಲು ರಾಜ್ಯದಾದ್ಯಂತ ‘ದೈವಜ್ಞ ದರ್ಶನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಿಸೆಂಬರ್ 27ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು…
*ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆ IIRF ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ – 2025*
*ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆ IIRF ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ – 2025* IIRF (Indian Institutional Ranking Framework) 2 ICOSA (International Council for School Accreditation) ಅವರಿಂದ ನೀಡಲ್ಪಡುವ IIRF ಎಜುಕೇಶನ್ ಇಂಪ್ಯಾಕ್ಟ್ ಅವಾರ್ಡ್ – 2025 (ಶೈಕ್ಷಣಿಕ ಶ್ರೇಷ್ಠತೆ) ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ ಎನ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 11, 2025ರಂದು ನವದೆಹಲಿಯಲ್ಲಿ ICOSA ಶಾಲಾ ಕಾಂಪ್ಲೇವ್ ಸಂದರ್ಭದಲ್ಲಿ ನಡೆಯಿತು. ಶಾಲೆಯ…
*ಹಲವು ವಕೀಲರ ವಿರೋಧದ ನಡುವೆಯೂ ಶಿವಮೊಗ್ಗಕ್ಕೆ ಬಂದ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಶಾನಂದರು*
*ಹಲವು ವಕೀಲರ ವಿರೋಧದ ನಡುವೆಯೂ ಶಿವಮೊಗ್ಗಕ್ಕೆ ಬಂದ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಶಾನಂದರು* ಶ್ರೀಗಂಧ ಸಂಸ್ಥೆ ಹಾಗೂ ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಇಂದು ಸಂಜೆ 6 ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಸಂಜೆ ಶಿವಮೊಗ್ಗದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಅವರು ಭೇಟಿ ನೀಡಿದರು. ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ ಕುರಿತು ಉಪನ್ಯಾಸ ನೀಡಲಿರುವ ಅವರು ಬರುತ್ತಾರೋ ಇಲ್ಲವೋ ಎಂಬುದರ ಕುತೂಹಲ…
*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?*
*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?* ಮದುವೆಯಾಗಿ ಒಂದು ತಿಂಗಳು ಕಳೆಯುವ ಒಳಗೆ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾರೆ. 27 ದಿನಗಳ ಹಿಂದೆಯಷ್ಟೇ ಲಿಖಿತ್ ಸಿಂಹ ಜೊತೆ ಐಶ್ವರ್ಯ ಮದುವೆ ನಡೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ ಐಶ್ವರ್ಯ, ಸಾಂಸಾರಿಕ ಬದುಕನ್ನು ಸರಿಯಾಗಿ ಆರಂಭಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ. ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಹಾಗೂ…
*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ*
*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ* ಶಿವಮೊಗ್ಗ: ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯ, ಹಜರತ್ ಸೈಯದ್ ಸಾದತ್ ದರ್ಗಾಕ್ಕೆ ಆಗಮಿಸುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಾಗ ಮಳೆಗಾಲದಲ್ಲಿ ಮಳೆ ಮತ್ತು ಬೇಸಿಗೆಯ ಬಿಸಿಲಿನಿಂದ ತೀವ್ರ ತೊಂದರೆಗೊಳಗಾಗುತ್ತಿದ್ದರು. ಇದನ್ನು ತಪ್ಪಿಸಲು 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರತಿ ಸಾಲಿನ ಮೇಲ್ಛಾವಣೆ ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಧಾರ್ಮಿಕ…
*ಸೀಬರ್ಡ್ ಬಸ್ ಭೀಕರ ದುರಂತ;* *ಶಿವಮೊಗ್ಗದ ಆ ಇಬ್ಬರು ಏನಾದರು?* *ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!* *سمندری بس کا سانحہ؛* *شیواموگا کے ان دو لوگوں کا کیا ہوا؟* *شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!*
*ಸೀಬರ್ಡ್ ಬಸ್ ಭೀಕರ ದುರಂತ;* *ಶಿವಮೊಗ್ಗದ ಆ ಇಬ್ಬರು ಏನಾದರು?* *ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!* *سمندری بس کا سانحہ؛* *شیواموگا کے ان دو لوگوں کا کیا ہوا؟* *شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!* ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಗೊರ್ಲತ್ತು ಕ್ರಾಸ್ ಬಳಿ ನಡೆದ…
*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ*
*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ* ಚಿತ್ರದುರ್ಗದ ಜಿಲ್ಲೆ (Chitradurga Bus Accident) ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿ ಉರಿದಿದೆ. ಇದೀಗ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ…
*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ* *Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ* *ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ*
*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ* *Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ* *ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ* 2025ನೇ ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವೈದ್ಯಕೀಯ ಪ್ರವೇಶ ಸಿದ್ಧತೆಗಾಗಿ ಮೀಸಲಾದ ಮಲೆನಾಡಿನ ಪ್ರಪ್ರಥಮ ರೆಸಿಡೆನ್ಸಿಯಲ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿ ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ. ಮಲೆನಾಡಿನ ಜನರಿಗೆ ನೀಡಿದ ಭಾಷೆಯನ್ನು ಈ ಮೂಲಕ ಈಡೇರಿಸಿದ್ದೇನೆ….
ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ*
*ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ* ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಈಗ ಹೊಸದೊಂದು ವಾದವೋ ವಿವಾದವೋ ಚರ್ಚೆಯೋ ಆರಂಭವಾಗಿದೆ. ಮೈಸೂರಿನ ಮಹಾಲಕ್ಷ್ಮೀ ಸ್ವೀಟ್ಸ್ ಶಿವಮೊಗ್ಗಕ್ಕೆ ಬರುತ್ತಿದೆ ಅಂದಾಗಲೇ ಕೆಲವರು ಆ ಹೆಸರಿನಲ್ಲಿ ಕಾಗೆಗಳಾಗಿ ಕಾಗೆ ಬಳಗ ಕರೆದು ಜಾಹಿರಾತು ಉಣ್ಣಲು ಬಿಡಬೇಕಿತ್ತು! ಆದರೆ, ಹಾಗಾಗಲಿಲ್ಲ. ಶಿವಮೊಗ್ಗದಂಥ ಸಾಂಸ್ಕೃತಿಕ ನಗರಿ(ಮೈಸೂರಿಗಿಂತ ಉನ್ನತಿಯಲ್ಲಿರೋ)ಯಲ್ಲಿ ಮಹಾಲಕ್ಷ್ಮೀ ಸ್ವೀಟ್ಸ್ ನವರ ಶಾಖೆಯ ಉದ್ಘಾಟನೆ ಸಂಬಂಧ ದಾರಿ ತಪ್ಪಿಸಿದ್ದು ಯಾರು? ಶಿವಮೊಗ್ಗದಲ್ಲಿ ಕೇವಲ 4 ಸ್ಥಳೀಯ ಪತ್ರಿಕೆಗಳು…


