Category: ಅಂಕಣ
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನೋವು ಯಾರ ಬಳಿ ಇಲ್ಲ; ಕೆಲವರು ಅಳುತ್ತಾ ಅಪ್ಪಿಕೊಳ್ಳುವರು ಕೆಲವರು ನಗುತ್ತಾ ಒಪ್ಪಿಕೊಳ್ಳುವರು… 2. ನೆಮ್ಮದಿಯನ್ನೂ ಹುಡುಕಬೇಕೆಂದರೆ… ಅದಕ್ಕಿಂತ ದುಃಖದ ಮಾತೇನಿದೆ ಹೃದಯವೇ? 3. ನನ್ನ ಮತ್ತು ಮಣ್ಣಿನ ಸಂಬಂಧ ಮಸಣದಲ್ಲಷ್ಟೇ ಅರ್ಥವಾಗುವುದು ಹೃದಯವೇ… 4. ಮಂಗನಿಂದ ಮಾನವ ಅಂದವರನ್ನು ಸಿಟ್ಟಿಂದ ಹುಡುಕುತ್ತಿದೆ… ಊಸರವಳ್ಳಿ! – *ಶಿ.ಜು.ಪಾಶ* 8050112067 (6/6/25)
ಕವಿಸಾಲು
ಶಿವಮೊಗ್ಗದ ಜಯಪ್ರಕಾಶ್ ನಾರಾಯಣ್ (ಜೆಪಿಎನ್ ) ಶಾಲೆಯ ನಮ್ಮ ಹೆಡ್ ಮಾಸ್ಟರ್ ಆಗಿದ್ದ ಜಿ.ಎನ್.ವೆಂಕಟಗಿರಿರಾವ್ ನಿಧನರಾದರು. ಜಿಎನ್ ವಿ ಎಂದರೆ ಶಿಸ್ತು- ಅವರಿಗೆ ನಮನಗಳನ್ನು ಸಲ್ಲಿಸುತ್ತಾ…ಈ ಕವಿಸಾಲು ಅವರ ಪಾದಾರವಿಂದಗಳಲ್ಲಿ ಈ ಮೂಲಕ ಚೆಲ್ಲುತ್ತಿದ್ದೇನೆ… Gm ಶುಭೋದಯ💐💐 *ಕವಿಸಾಲು* ವಯಸ್ಸು,ಸಮಯ,ಜಾಗ ನೋಡದೇ ಆವರಿಸಿಕೊಳ್ಳುವುದಕ್ಕೆ ಪ್ರೇಮ ಮತ್ತು ಸಾವು ಎನ್ನುತ್ತೇವೆ ಹೃದಯವೇ… – *ಶಿ.ಜು.ಪಾಶ* 8050112067 (2/5/25)