ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನರಸಿಂಹ ಗಂಧದಮನೆ ನೇಮಕ*
*ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನರಸಿಂಹ ಗಂಧದಮನೆ ನೇಮಕ* ಶಿವಮೊಗ್ಗದ ಸಹಕಾರಿ ಹೆಗಲೆಂದೇ ಪ್ರಸಿದ್ಧರಾಗಿರುವ ಜೀವನ್ಮುಖಿ ಯುವ ಮುಖಂಡ ನರಸಿಂಹ ಗಂಧದಮನೆಯವರನ್ನು ಶಿವಮೊಗ್ಗ ಜಿಲ್ಲಾ ಜನತಾದಳ ಜಾತ್ಯಾತೀತದ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರೂ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರೂ ಆಗಿರುವ ನರಸಿಂಹ ಗಂಧದಮನೆ ನೇಮಕ ಹಲವರಲ್ಲಿ ಹರ್ಷ ಉಂಟು ಮಾಡಿದೆ.
*ಚಾಕು ಹಾಕಿ ಕೊಲೆಗೆ ಯತ್ನ;* *ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ*
*ಚಾಕು ಹಾಕಿ ಕೊಲೆಗೆ ಯತ್ನ;* *ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ* ಆಸ್ತಿ ವಿಚಾರದಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರವಿನಾಯ್ಕ(32) ಮತ್ತು ಲಕ್ಷ್ಮೀಬಾಯಿ(40) ರವರಿಗೆ 8 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದ್ದಾರೆ. ಭದ್ರಾವತಿ ಕೊಮರನಹಳ್ಳಿ ತಾಂಡದ ವಾಸಿ ರವಿನಾಯ್ಕ, ರಾಜನಾಯ್ಕ ಮತ್ತು ಲಕ್ಷ್ಮೀಬಾಯಿ ಆಸ್ತಿ ವಿಚಾರದಲ್ಲಿ ಶರತ್, ಸುರೇಂದ್ರ, ವಿನಯ್…
ಮೇ.9 ರಂದು ಚಿತ್ರದುರ್ಗದಲ್ಲಿ ಯಡಿಯೂರೋತ್ಸವ; ಇದು ವಿಜಯೇಂದ್ರ ವೈಭವಂ… ಮದಕರಿ ನಾಯಕ ಫ್ರಂಟ್ ಲೈನಿಗೆ ಬಂದಿದ್ದೇಕೆ?
ಮೇ.9 ರಂದು ಚಿತ್ರದುರ್ಗದಲ್ಲಿ ಯಡಿಯೂರೋತ್ಸವ; ಇದು ವಿಜಯೇಂದ್ರ ವೈಭವಂ… ಮದಕರಿ ನಾಯಕ ಫ್ರಂಟ್ ಲೈನಿಗೆ ಬಂದಿದ್ದೇಕೆ? ಮೇ ಒಂಭತ್ತರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರೋತ್ಸವ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಆತಂಕ ಮೂಡಿಸಿದೆ.ಕಾರಣ?ಈ ಉತ್ಸವ ಕರ್ನಾಟಕದ ಜಾತಿ ರಾಜಕೀಯದ ಚಿತ್ರವನ್ನು ಬದಲಿಸಲಿದೆ ಎಂಬ ಮಾಹಿತಿ. ಅಂದ ಹಾಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುವ ಈ ಉತ್ಸವ ಕೇವಲ ಬಲ ಪ್ರದರ್ಶನದ ಉದ್ದೇಶವನ್ನಷ್ಟೇ ಹೊಂದಿದ್ದರೆ ಅದು ಕಾಂಗ್ರೆಸ್ ನಾಯಕರಿಗೆ ಅಷ್ಟೇನೂ ಆತಂಕ ಮೂಡಿಸುತ್ತಿರಲಿಲ್ಲ.ಆದರೆ ಈ ಉತ್ಸವದ ತಯಾರಿ ಹೇಗೆ ನಡೆದಿದೆ…
ಕುವೆಂಪು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಂಭ್ರಮ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಸಾರ್ಥಕ : ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್*
ಕುವೆಂಪು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಂಭ್ರಮ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಸಾರ್ಥಕ : ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್* ಶಿವಮೊಗ್ಗ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ತಿಳಿಸಿದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ೩೫ ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳೇಸೋಲುಗಳು ಜೀವನದ ಭಾಗ, ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು…
*ಕುವೆಂಪು ವಿವಿ ಘಟಿಕೋತ್ಸವ: ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು;* *ಅಭಿಷೇಕ್ ಹೆಚ್. ಎಂ.ಗೆ 10 ಚಿನ್ನದ ಪದಕ*
*ಕುವೆಂಪು ವಿವಿ ಘಟಿಕೋತ್ಸವ: ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು;* *ಅಭಿಷೇಕ್ ಹೆಚ್. ಎಂ.ಗೆ 10 ಚಿನ್ನದ ಪದಕ* ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಅವರಲ್ಲಿ ಪ್ರಮುಖರು: ಅಭಿಷೇಕ್…
ಕವಿಸಾಲು
Gm ಶುಭೋದಯ💐💐 *ಕವಿಸಾಲು* ೧ ಭಾಷೆ ಕೊಟ್ಟಿದ್ದನ್ನು ಹೀಗೂ ನಿಭಾಯಿಸಿಬಿಟ್ಟೆ ನಾನು… ಕಣ್ಣೀರಾಗಲು ಬಯಸಿದ್ದೆ; ಮುಗುಳ್ನಗುವುದು ಅನಿವಾರ್ಯವಾಗ್ಹೋಯ್ತು! ೨ ಪ್ರೇಮವೆಂಬುದು ಬಹುದೊಡ್ಡ ಶಿಕ್ಷೆ… ಜನ್ಮಗಳು ದಾಟಿದರೂ ಶಿಕ್ಷೆ ಹಾಗೇ ಉಳಿದಿದೆ! ೩ ಬಾ ಹೊರಟು ಬಿಡೋಣ; ನಿನ್ನ ದಾರಿ ನನ್ನತ್ತ ಮಾಡಿ ನನ್ನ ದಾರಿ ನಿನ್ನತ್ತ ಮಾಡಿ ೪ ಬದುಕು ಮೆಲ್ಲ ಮೆಲ್ಲಗೆ ಕಲಿಸುತ್ತಿದೆ; ಎಷ್ಟು ಪ್ರೀತಿಸುತ್ತೀಯೋ ಅಷ್ಟು ಸುಖವಾಗಿರುತ್ತೀ ಎಂದು! – *ಶಿ.ಜು.ಪಾಶ* 8050112067 (6/5/2026)
*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ*
*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ* ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿಸಲ್ಪಟ್ಟ ಇಬ್ಬರಿಗೂ ನ್ಯಾಯಾಲಯ ಜೈಲಿಗೆ ಕಳಿಸಿದೆ. ಮೇ.4 ರ ಬೆಳಿಗ್ಗೆ ಎಎಸ್ ಐ ಮಂಜುನಾಥ್ ಮತ್ತು ಪೊಲೀಸ್ ಪೇದೆ ಸಂತೋಷ್ ಗಾಂಧಿ ಬಜಾರಿನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ ದ್ವಿಚಕ್ರ ವಾಹನ ಸವಾರ ಸೈಯದ್ ಮುಜಾಮಿಲ್ ಹೆಲ್ಮೆಟ್ ಧರಿಸದೇ…
*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು*
*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು* ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ವಡ್ಡರಹಟ್ಟಿ ನಿವಾಸಿ *ಹನುಮಂತಪ್ಪ* ಎಂಬುವವರು ಕಳೆದ ಎರಡು ವರ್ಷಗಳಿಂದ ಸರ್ಕಾರದ ಸೌಲಭ್ಯ ಸಿಗದೆ ಪರದಾಡುತ್ತಿದ್ದರು. ಇವರ ಹೆಸರಿನಲ್ಲೇ ಮತ್ತೊಬ್ಬರು ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ತಾಂತ್ರಿಕ ದೋಷದಿಂದಾಗಿ ಇವರ ವೃದ್ಧಾಪ್ಯ ವೇತನ ಸ್ಥಗಿತಗೊಂಡಿತ್ತು. ಈ ಬಗ್ಗೆ ಹನುಮಂತಪ್ಪನವರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಧು ಬಂಗಾರಪ್ಪ ಅವರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮಳೆ…
*ಮೇ 06ರಂದು ನಡೆಯುವ 35ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ* *ಕೋಣಂದೂರು ಲಿಂಗಪ್ಪ, ಕೆ. ವಿ. ಅಕ್ಷರ ಹಾಗೂ ಪ್ರೊ. ಎಚ್. ಎ. ರಂಗನಾಥ್ಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್*
*ಮೇ 06ರಂದು ನಡೆಯುವ 35ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ* *ಕೋಣಂದೂರು ಲಿಂಗಪ್ಪ, ಕೆ. ವಿ. ಅಕ್ಷರ ಹಾಗೂ ಪ್ರೊ. ಎಚ್. ಎ. ರಂಗನಾಥ್ಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್* ಶಂಕರಘಟ್ಟ ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ. ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. ಎಚ್. ಎ. ರಂಗನಾಥ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ…
*ಶಿವಮೊಗ್ಗ ಎಪಿಎಂಸಿ;* *ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…*
*ಶಿವಮೊಗ್ಗ ಎಪಿಎಂಸಿ;* *ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…* ಶಿವಮೊಗ್ಗದ ಎಪಿಎಂಸಿ ಅಕ್ರಮಗಳು ಅಲ್ಲಿನ ಕಾರ್ಯದರ್ಶಿಗಳ ಹಪಾಹಪಿತನದಿಂದ ಮುಗಿಲು ಮುಟ್ಟುತ್ತಿವೆ. ಈ ಕಾರ್ಯದರ್ಶಿ ಸರ್ಕಾರಕ್ಕೆ ಉದ್ಧಾರ ಮಾಡುವ ಬದಲು ಮಾಡುತ್ತಿರುವುದೇನು? ಸರ್ಕಾರಕ್ಕೆ ಈ ಮುಗ್ಧಮುಖಿ ಕಾರ್ಯದರ್ಶಿಯಿಂದ ಆಗುತ್ತಿರುವ ಅಪಾರ ಪ್ರಮಾಣದ ನಷ್ಟವೇನು? ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸದುದ್ದೇಶದಿಂದ ಆರಂಭವಾಗುತ್ತಿರುವ *ಎಪಿಎಂಸಿಯೂ… ಅಲ್ಲಿನ ಕಾರ್ಯದರ್ಶಿಯ ಕಥೆಯೂ…ಮಾಫಿಯಾವೂ…* ನಿಮ್ಮ ಪ್ರತಿ ಈ ವಾರವೇ ಕಾಯ್ದಿರಿಸಿ… – *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* (8050112067)


